Tuesday 12 April 2011

ನವರಂಗೋತ್ಸವದಲ್ಲಿ ಆಚಾರ್ಯ ಪ್ರಹಸನ ನಾಟಕ ಪ್ರದರ್ಶನ

ನಮ ತುಳುವೆರ್ ಕಲಾ ಸಂಘಟನೆ (ರಿ) ಮುದ್ರಾಡಿ ಇದರ ರಜತ ಸಂಭ್ರಮದ ಅಂಗವಾಗಿ ರಾಷ್ಟ್ರೀಯ ನಾಟಕೋತ್ಸವ ನವರಂಗೋತ್ಸವದಲ್ಲಿ26-02-11 ಸಂಜೆ ಗಂಟೆ 7.30ಕ್ಕೆ ಚರಕ ಕಲಾವಿದರು ಹೆಗ್ಗೋಡು ಇವರಿಂದ ಮೋಲಿಯೇರ್‌ನ ಆಚಾರ್ಯ ಪ್ರಹಸನ ನಾಟಕ ಪ್ರದರ್ಶನಗೊಂಡಿತು.
 ಪ್ರಸ್ತುತ ಆಚಾರ್ಯ ಪ್ರಹಸನ ಮೋಲಿಯರ್‌ನ ತಾರ್ತುಫ್ ನಾಟಕದ ರೂಪಾಂತರವೆನ್ನಬಹುದು. ಇದನ್ನು ಕನ್ನಡಕ್ಕೆ ರೂಪಾಂತರ ಮಾಡಿ ನಿರ್ದೇಶಿಸಿದವರು ಪ್ರಸನ್ನ. ಸಮಾಜದಲ್ಲಿರುವ ಮೋಸ, ಕಪಟ, ವಂಚನೆಯ ಗುಣಗಳನ್ನು ಆಯುಧಗಳಂತೆ ಬಳಸಿಕೊಳ್ಳುವವರು ಮತ್ತು ಅವುಗಳಿಗೆ ಕುರಿಮಂದೆಯಂತೆ ಬಲಿಯಾಗುವವರನ್ನು ವಿಡಂಬಿಸುವ ನಾಟಕವಿದು. ಜನರು ಬೈಗುಳನ್ನು ಸಹಿಸಿಕೊಂಡಾರು ಆದರೆ ಲೇವಡಿಯನ್ನು ಸಹಿಸಲಾರರು ಎಂಬುದನ್ನು ಕಂಡುಕೊಂಡಿದ್ದ ಮೋಲಿಯೇರ್ ಸಮಾಜವನ್ನು ತಿದ್ದಲು ಲೇವಡಿಯನ್ನೇ ತಂತ್ರವಾಗಿ ಬಳಸಿಕೊಂಡ. ಧಾರ್ಮಿಕತೆಯ ಸೋಗಿನಲ್ಲಿ ಪರರ ದುಡಿಮೆಗೆ ಬಂದಳಿಕೆಯಂತೆ ಅಂಟಿಕೊಂಡು, ಅವರ ಸರ್ವಸ್ವವನ್ನು ನಾಶಮಾಡಬಲ್ಲ ದುರುಳ ಪಾತ್ರಗಳನ್ನು ಲೇವಡಿ ಮಾಡುವ ಮೂಲಕ ಅವುಗಳ ಬಣ್ಣ ಬಯಲು ಮಾಡುವುದು ನಾಟಕದ ಕಥಾ ಹಂದರ.

1 comment: