Monday 2 May 2011

ಶ್ರೀಮತಿ ಉಮಾಶ್ರೀಯವರಿಗೆ ಮುದ್ರಾಡಿ ನಾಟ್ಕ ಸಂಮಾನ

 ಮುದ್ರಾಡಿ : ಖ್ಯಾತ ಸಾಂಸ್ಕೃತಿಕ ಸಂಘಟನೆ ನಮತುಳುವೆರ್ ಕಲಾ ಸಂಘಟನೆ (ನಾಟ್ಕ) ಮುದ್ರಾಡಿ ಸಂಸ್ಥೆ, ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಸಂಸ್ಥೆಯ ಬೆಳ್ಳಿಹಬ್ಬದ ಸವಿನೆನಪಿಗಾಗಿ ಪ್ರಾರಂಭಿಸಿರುವ, ಪ್ರಶಸ್ತಿ ಪತ್ರ, ರೂ 25,000 ನಗದು ಒಳಗೊಂಡ ಮುದ್ರಾಡಿ ನಾಟ್ಕ ಸಂಮಾನ ರಾಷ್ಟ್ರೀಯ ಪ್ರಶಸ್ತಿಯನ್ನು ರಂಗ ಕಲಾವಿದೆ ಶ್ರೀಮತಿ ಉಮಾಶ್ರೀಯವರ ಜೀವಮಾನದ ಂಗಭೂಮಿಯ ಸಾಧನೆಯನ್ನು ಗಮನಿಸಿ ನೀಡಿ ಗೌರವಿಸಲಾಯಿತು
   ಪ್ರಶಸ್ತಿ ಪ್ರದಾನ ಸಮಾರಂಭ ವಿಶ್ಷರಂಗಭೂಮಿ ದಿನ ಮಾರ್ಚ್ 27 ಭಾನುವಾರ ಸಂಜೆ ಗಂಟೆ 7ಕ್ಕೆ ಮುದ್ರಾಡಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ರಂಗಮಂಟಪದಲ್ಲಿ ಜರಗಿದ ಈ ಸಮಾರಂಭದಲ್ಲಿ ನಾಡಿನ ಹಿರಿಯ ರಂಗಚೇತನ ನಾಡೋಜ ಡಾ ಎಣಗಿ ಬಾಳಪ್ಪ ಇವರು ಉಮಾಶ್ರೀಯವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು ಅತಿಥಿಗಳಾಗಿ ಖ್ಯಾತ ಸಂಗೀತಜ್ಞ ಈ ಬಾರಿಯ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಶ್ರೀ ಗುರುರಾಜ್ ಮಾರ್ಪಳ್ಳಿ ಆಗಮಿಸಿದ್ದರು. ಸಮಾರಂಭ ಅಧ್ಯಕ್ಷತೆಯನ್ನು ಕಾರ್ಕಳ ಕ್ಷೇತ್ರದ ಶಾಸಕ ಶ್ರೀ ಎಚ್ ಗೋಪಾಲ್ ಭಂಡಾರಿ ವಹಿಸಿದ್ದರು. ಸಮಾರಂಭದ ನಂತರ ನಾಟ್ಕ (ರಿ) ಕಲಾವಿದರಿಂದ ಅಸುದ್ದೋ (ಮೂಲ ಕಥೆ: ಪ್ರಭಾಕರ್ ಶಿಶಿಲ, ರಂಗರೂಪ: ಸುಕುಮಾರ್ ಮೋಹನ್, ನಿರ್ದೇಶನ: ಸುಧೀಂದ್ರ ಮೋಹನ್) ತುಳು ನಾಟಕ ಪ್ರದರ್ಶನ ಜರಗಿತು.
   ಮುದ್ರಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಜರಗಿದ ಈ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಗ್ರಾಮೀಣ ನಾಟಕ ಸಂಘಟನೆಯ ರಾಷ್ಟ್ರೀಯ ಪ್ರಶಸ್ತಿ ಎರಡೂ ಕೂಡಾ ರಂಗಭೂಮಿಯ ಇತಿಹಾಸದಲ್ಲಿ ದಾಖಲಾರ್ಹ ಸಂಗತಿ. ಸಮಾರಂಭದ ಯಶಸ್ಸಿಗೆ ಕಾರಣರಾದ ಮುದ್ರಾಡಿ ನಾಗರಿಕರಿಗೆ ನಾಟ್ಕ ಅಧ್ಯಕ್ಷ ಶ್ರೀ ಸುಕುಮಾರ್ ಮೋಹನ್ ಕೃತಜ್ಞ ತೆ ತಿಳಿಸಿದ್ದಾರೆ.