Saturday 16 April 2011

ರಂಗಭೂಮಿಯಲ್ಲಿ ತೊಟ್ಟಬಾಣ ಮತ್ತೆ ತೊಡದ ಹೊಸ ಆಶಯ ಮೂಡಲಿ: ಸಿ ಬಸವಲಿಂಗಯ್ಯ

 ಹೆಬ್ರಿ : ರಂಗಭೂಮಿ ಒಂದು ಜಂಗಮ ಕಲೆ.ಆದ್ದರಿಂದ ಅದು ಶಾಸ್ತ್ರಗಳನ್ನು ಮುರಿದು ಹೊಸ ಕಥನವನ್ನು ಕಟ್ಟುತ್ತದೆ. ಅನಾದಿಕಾಲವನ್ನು ವರ್ತಮಾನಕ್ಕೆ ತರುವುದು, ವರ್ತಮಾನವನ್ನು ಪುರಾಣಗೊಳಿಸುವುದು ರಂಗಭೂಮಿಗೆ ಮಾತ್ರ ಸಾಧ್ಯ ಎಂದು ಖ್ಯಾತ ರಂಗನಿರ್ದೇಶಕ ಸಿ ಬಸವಲಿಂಗಯ್ಯ ಹೇಳಿದರು.
ನಮ ತುಳುವೆರ್ ಕಲಾ ಸಂಘಟನೆ (ರಿ) ಮುದ್ರಾಡಿ ಇದರ ರಜತ ಸಂಭ್ರಮದ ಅಂಗವಾಗಿಭಾನುವಾರಉಡುಪಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮುದ್ರಾಡಿ ಇದರ ಆವರಣದಲ್ಲಿ ನಿರ್ಮಿಸಿರುವ ಬಿ.ವಿ ಕಾರಂತ ರಂಗವೇದಿಕೆಯಲ್ಲಿ ಜರಗುತ್ತಿರುವ ರಾಷ್ಟ್ರೀಯ ನಾಟಕೋತ್ಸ

ವದ ಅಂಗವಾಗಿ ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಮಾಯಣ, ಮಹಾಭಾರತ ಮತ್ತು ಕಾಳಿದಾಸರ ಕಥನ ಪರಂಪರೆ ಇಂದಿಗೂ ಚಲನಶೀಲತೆಯಿಂದ ಪ್ರಸ್ತುತವಾಗಿದೆ. ಈ ಪರಂಪರೆಯಲ್ಲಿಯ ಪ್ರತಿಮೆರೂಪಕಗಳು ಹೊಸ ಆಕೃತಿಗಳಲ್ಲಿ ಕಟ್ಟುವ ಪ್ರಯತ್ನ ರಂಗಭೂಮಿಯಲ್ಲಿ ನಡೆಯಬೇಕಾಗಿದೆ.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತಿ ಅಂಬಾತನಯ ಮುದ್ರಾಡಿ ಮಾತನಾಡಿ ಕಾಲಪ್ರಜ್ಞೆ ಮತ್ತು ಕಲಾಪ್ರಜ್ಞೆಯಿಂದ ನಾಟಕಗಳು ಪ್ರದರ್ಶಗೊಳ್ಳಬೇಕು. ಪ್ರದರ್ಶನದಲ್ಲೂ ಪ್ರೇಕ್ಷಕರಿಗೆ  ಒಂದು ದರ್ಶನ ಸಾಧ್ಯವಾಗಬೇಕು ಎಂದರು. ರಂಗಕರ್ಮಿ ಡಾ. ನಾಗೇಶ್ ಬೆಟ್ಟಕೋಟೆ ಬೆಂಗಳೂರು ಮತ್ತು ನಾಟ್ಕ ಮುದ್ರಾಡಿಯ ಸಂಚಾಲಕರಾದ ಧರ್ಮಯೋಗಿ ಮೋಹನ್ ಉಪಸ್ಥಿತರಿದ್ದರು. ಪ್ರಸಾದ್ ರಾವ್ ಕಾರ್ಯಕ್ರಮ ನಿರೂಪಿಸಿದರು. ನಾಟ್ಕ ಸಂಘಟನೆಯ ಅಧ್ಯಕ್ಷರಾದ ಸುಕುಮಾರ್ ಮೋಹನ್ ಸ್ವಾಗತಿಸಿದರು. ಸುರೇಂದ್ರ ಮೋಹನ್ ವಂದಿಸಿದರು.  ಬಳಿಕ ನಡೆದ ಸಮಕಾಲೀನ ರಂಗಭೂಮಿಯ ವಸ್ತು ಮತ್ತು ಆಶಯ ವಿಚಾರಗೋಷ್ಠಿಯಲ್ಲಿ ಬೆಂಗಳೂರಿನ ಪ್ರೊ ಸುಬ್ರಹ್ಮಣ್ಯಸ್ವಾಮಿ, ಐ ಕೆ ಬೋಳುವಾರು,ಪುತ್ತೂರು ಪ್ರಬಂಧ ಮಂಡಿಸಿದರು.ಗೋಷ್ಠಿಯ ಸಮನ್ವಯಕಾರರಾಗಿ ಪ್ರಸಾದ್ ರಾವ್ ಮಾತನಾಡಿದರು. ಸಂತೋಷ ನಾಯಕ್ ಪಟ್ಲ ನಿರೂಪಿಸಿದರು.

No comments:

Post a Comment