Tuesday 23 August 2011

"ಪಾಠನಾಟಕ" ತರಬೇತಿ ಶಿಬಿರ





  ಉಡುಪಿ; ಕರ್ನಾಟಕ ನಾಟಕ ಅಕಾಡೆಮಿ, ನಮತುಳುವೆರ್ ಕಲಾ ಸಂಘಟನೆ ಮುದ್ರಾಡಿ ಇದರ ಆಶ್ರಯದಲ್ಲಿ ಮುದ್ರಾಡಿಯ ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯ ಕನ್ನಡ ಸಂಘದ ವಿದ್ಯಾರ್ಥಿಗಳಿಗೆ "ಪಾಠನಾಟಕ" ತರಬೇತಿ ಶಿಬಿರವು ಮುದ್ರಾಡಿಯಲ್ಲಿ ನಡೆಯಿತು.
 ಮುದ್ರಾಡಿಯ ನಮತುಳುವೆರ್ ಕಲಾ ಸಂಘಟನೆ ಯ ನೇತೃತ್ವದಲ್ಲಿ ಈ ವಿದ್ಯಾರ್ಥಿಗಳು ಇದೇ ತಿಂಗಳ ಕೊನೇ ವಾರದಲ್ಲಿ ಉಡುಪಿ ಜಿಲ್ಲೆಯಾದ್ಯಂತ "ಶಾಲೆಯತ್ತ ರಂಗಭೂಮಿ-ಉಡುಪಿ ಜಿಲ್ಲಾ ಜಾಥಾ" ಹಮ್ಮಿಕೊಂಡಿದ್ದು ಜಿಲ್ಲೆಯ ಪ್ರೌಢಶಾಲೆಗಳಲ್ಲಿ ನಾಟಕ ಪ್ರದರ್ಶನವನ್ನು ನೀಡಲಿದೆ. ರಂಗಕರ್ಮಿ ಐಕೆ ಬೊಳುವಾರು ರವರು ರಂಗರೂಪಕ್ಕಿಳಿಸಿದ ಎಂಟರಿಂದ ಹತ್ತನೇ ತರಗತಿವರೆಗಿನ ಆಯ್ದ ಕನ್ನಡ ಪಾಠ ಹಾಗೂ ಪದ್ಯಗಳನ್ನು ರಂಗಕೃತಿಯಾಗಿಸಿಕೊಂಡು ಪುತ್ತೂರಿನ ರಂಗ ನಿರ್ದೇಶಕ ಮೌನೇಶ್ ವಿಶ್ವಕರ್ಮ ನಾಟಕವನ್ನು ಸಿದ್ದಪಡಿಸುತ್ತಿದ್ದಾರೆ. ಶಾಲಾ ಸಂಚಾಲಕ ದಿವಾಕರ ಎನ್.ಶೆಟ್ಟಿ, ತಾ.ಪಂ.ಅಧ್ಯಕ್ಷ ಮಂಜುನಾಥ ಪೂಜಾರಿ, ಸಾಹಿತಿ ಅಂಬಾತನಯ ಮುದ್ರಾಡಿ, ಗ್ರಾ.ಪಂ.ಅಧ್ಯಕ್ಷರಾದ ಸದಾಶಿವ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಬಾಯರಿ, ಶಿಕ್ಷಕ ಪಿ.ವಿ.ಆನಂದ್ ಸಾಲಿಗ್ರಾಮ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ, ನಾಟ್ಕ ಮುದ್ರಾಡಿ ಇದರ ಅಧ್ಯಕ್ಷರಾದ ಸುಕುಮಾರ್ ಮೋಹನ್, ಕಾರ್ಯದರ್ಶಿ ಸುಧೀಂದ್ರ ಮೋಹನ್, ಸುರೇಂದ್ರ ಮೋಹನ್, ನಿರ್ದೇಶಕ ಮೌನೇಶ್ ವಿಶ್ವಕರ್ಮ ಉಪಸ್ಥಿತರಿದ್ದರು.

Thursday 4 August 2011

ನಾಟ್ಕಾಸ್ ನಾಟಕೋತ್ಸವ

‘ಕಾರ್ಕಳ, ಆ.4: ಕರ್ನಾಟಕ ನಾಟಕ ಅಕಾಡಮಿಯ ಸಹಯೋಗದೊಂದಿಗೆ ಮುದ್ರಾಡಿಯ ನಮ ತುಳುವೆರ್ ಕಲಾ ಸಂಘಟನೆ, ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ರಾಮಕೃಷ್ಣ ಸಭಾಭವನ ದಲ್ಲಿ ಒಂದು ವಾರ ಕಾಲ ಆಯೋಜಿಸಿದ ನಾಟ್ಕಾಸ್’ ನಾಟಕೋತ್ಸವಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.

ನಗಾರಿ ಬಾರಿಸುವ ಮೂಲಕ ನಾಟಕೋತ್ಸವವನ್ನು ಉದ್ಘಾಟಿಸಿದ ಕಾರ್ಕಳ ಶಾಸ್ತ್ರೀಯ ಸಂಗೀತ ಸಭಾದ ಅಧ್ಯಕ್ಷ ನಿತ್ಯಾನಂದ ಪೈ ಮಾತನಾಡಿ, ಈ ಕಾಲದ ಜನರ ಪ್ರತಿಯೊಂದು ವರ್ತನೆಯೂ ನಾಟಕದಂತೆಯೆ ಭಾಸವಾಗುತ್ತದೆ. ಇಂದಿನವರಿಗೆ ನಾಟಕದಲ್ಲಿ ಆಸಕ್ತಿ ಕಡಿಮೆಯಾಗಲು ಇದೂ ಒಂದು ಕಾರಣವಿರಬಹುದೆಂದು ಅಭಿಪ್ರಾಯಪಟ್ಟರು.



‘‘ಕಾಲೇಜಿನ ಪ್ರಾಧ್ಯಾಪಕ ಡಾ.ಜಯಪ್ರಾಕಾಶ್ ಮಾವಿನಕುಳಿ ಕಾರ್ಯಕ್ರಮ ನಿರ್ವಹಿಸಿದರು. ನಾಟಕೋತ್ಸವದ ಮೊದಲ ದಿನದಂದು ಬೆಂಗಳೂರಿನ ಅನಾವರಣ ತಂಡ, ಡಾ.ರಾಜಪ್ಪದಳವಾಯಿ ವಿರಚಿತ ಒಂದು ಬೊಗಸೆ ನೀರು’ ಎಂಬ ಸಾಮಾಜಿಕ ನಾಟಕ ವನ್ನು ಹು.ದಾ.ಮುತ್ತುರಾಜರ ನಿರ್ದೇಶನದಲ್ಲಿ ಪ್ರದರ್ಶಿಸಿದರು. ನಾಟಕೋತ್ಸವದ ಎರಡನೆಯ ದಿನ ಉಡುಪಿಯರಥಬೀದಿ ಗೆಳೆಯರು ಸಾದತ್ ಹುಸೇನ್ ಮಾಂಟೋನ ಮಿಷ್ಟೇಕ್’ ನಾಟಕವನ್ನು ಶ್ರೀಪಾದ್ ಭಟ್‌ರ ನಿರ್ದೇಶನದಲ್ಲಿ ಪ್ರದರ್ಶಿಸಿತು.