Friday 22 April 2011

ಮುದ್ರಾಡಿ ಸುಕುಮಾರ್ ಮೋಹನ್ ರವರಿಗೆ ಯು.ಎ.ಇ. ಯಲ್ಲಿ ಸನ್ಮಾನ "ತೌಳವ ಕಲಾ ತಿಲಕ" ಬಿರುದು ನೀಡಿ ಗೌರವ ಸಮರ್ಪಣೆ

 ಕಾರ್ಕಳ ತಾಲೂಕಿನ ಮುದ್ರಾಡಿ ಗ್ರಾಮದಲ್ಲಿ ನಮತುಳುವೆರ್ ಕಲಾ ಸಂಘಟನೆಯ ಆಶ್ರಯದಲ್ಲಿ ಫೆಬ್ರವರಿ 25 ರಿಂದ ಮಾರ್ಚ್ 5 ನೇ ತಾರೀಕಿನವರೆಗೆ ನಡೆದ ರಾಷ್ಟ್ರೀಯ ಮಟ್ಟದ ನಾಟಕೋತ್ಸವ " ರಂಗೋತ್ಸವ 2011" ಯಶಸ್ವಿಯಾಗಿ ನಡೆದು ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದೆ. ಶ್ರಿ ಸುಕುಮಾರ್ ಮೋಹನ್ ರವರು ಕಳೆದ 25 ವರ್ಷಗಳಿಂದ ಕನ್ನಡ ತುಳು ಭಾಷೆ ಕಲೆ ಸಂಸ್ಕೃತಿಯನ್ನು ನಾಡಿನಾದ್ಯಂತ ನಾಟಕಗಳ ಮೂಲಕ ಜನ ಜಾಗೃತಿಯನ್ನು ಮೂಡಿಸಿದ ಸಾಧನೆಯನ್ನು ಮೆಚ್ಚಿ ಮಾರ್ಚ್ 21ನೇ ತಾರೀಕು ಸೋಮವಾರ ರಾತ್ರಿ 8.00 ಗಂಟೆಗೆ ಅಬುಧಾಬಿಯ ಹಮ್ದಾನ್ ಸ್ಟ್ರೀಟ್, ಅರಬ್ ಉಡುಪಿ ರೆಸ್ಟೋರೆಂಟ್ ಸಭಾಂಗಣದಲ್ಲಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಸಮಸ್ತ ಕಲಾಭಿಮಾನಿಗಳ ಪರವಾಗಿ ಅರಬ್ ಉಡುಪಿ ರೆಸ್ಟೊರೆಂಟ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶೇಖರ್ ಶೆಟ್ಟಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಕುಶಾಲ ಶೇಕರ್ ಶೆಟ್ಟಿಯವರು, ಸುಕುಮಾರ್ ಮೋಹನ್ ರವರನ್ನು ಅಭಿನಂದಿಸುತ್ತಾ ಶಾಲು ಹೊದಿಸಿ ಫಲ ಪುಷ್ಪವನ್ನು, ಸ್ಮರಣಿಕೆಯೊಂದಿಗೆ "ತೌಳವ ಕಲಾ ತಿಲಕ" ಬಿರುದನ್ನು ನೀಡಿ ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿದ ಶ್ರೀ ಸುಕುಮಾರ್ ಮೋಹನ್ ರವರು ಯು.ಎ.ಇ. ಯ ಕಲಾಭಿಮಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ, ಕಾರ್ಕಳದ ಮುದ್ರಾಡಿಯಂತ ಕುಗ್ರಾಮದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಡೆದ ಕಲಾ ಕಾರ್ಯಕ್ರಮಕ್ಕೆ ಅರಬ್ ಸಂಯುಕ್ತ ಸಂಸ್ಥಾನದ ಸಹೃದಯಿ ಕಲಾ ಪೋಷಕರು ಬೆಂಬಲ ನೀಡಿ ಕಾರ್ಯಕ್ರಮದ ಯಶಸ್ಸಿನಲ್ಲಿ ಪಾಲುಧಾರರಾಗಿದ್ದಾರೆ ಎಂದು ಹೇಳಿ ಸರ್ವರಿಗೂ ವಂದನೆಗಳನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ಪರವಾಗಿ ಯು.ಎ.ಇ. ಯಲ್ಲಿರುವ ಕಲಾ ಪೋಷಕರಿಗೆ ಶಾಲು ಹೊದಿಸಿ ಫಲಕ ನೀಡಿ ಗೌರವಿಸಿ ತಮ್ಮ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನಾಟಕೋತ್ಸವದ ಪೂರ್ಣ ಲೇಖನವನ್ನು ಅಮೂಲ್ಯ ಮಾಹಿತಿಯೊಂದಿಗೆ ಪ್ರಕಟಿಸಿ ವಿಶ್ವದಾದ್ಯಂತ ಮುಟ್ಟಿಸಿದ ಗಲ್ಫ್ ಕನ್ನಡಿಗ ಬಳಗದ ಸೇವೆಯನ್ನು ಸ್ಮರಿಸಿಕೊಂಡು ಕಲಾ ಸೇವೆಗೆ ಮಾಧ್ಯಮಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.



ಬಿ. ಕೆ. ಗಣೇಶ್ ರೈಬ್ ಸಂಯುಕ್ತ ಸಂಸ್ಥಾನ

No comments:

Post a Comment