Saturday 16 April 2011

ಮುದ್ರಾಡಿ ರಾಷ್ಟ್ರೀಯ ನಾಟಕೋತ್ಸವ ನವರಂಗೋತ್ಸವದಲ್ಲಿ ಅಣ್ಣಾ ವಾಲಿ ನಾಟಕ ಪ್ರದರ್ಶನ

ನಮ ತುಳುವೆರ್ ಕಲಾ ಸಂಘಟನೆ (ರಿ) ಮುದ್ರಾಡಿ ಇದರ ರಜತ ಸಂಭ್ರಮದ ಅಂಗವಾಗಿ ಫೆಬ್ರವರಿ 04-03-11 ಸಂಜೆ ಗಂಟೆ 7.30 ಕ್ಕೆ ಅತಿಥೇಯ ನಾಟ್ಕ ಮುದ್ರಾಡಿ ಇವರಿಂದ ಅಣ್ಣಾ ವಾಲಿ ನಾಟಕ ಪ್ರದರ್ಶನಗೊಂಡಿದೆ.
  ಪುರಾಣದ ವಾಲಿ-ಸುಗ್ರೀವರ ಕಥಾನಕವನ್ನು ಹೊಸ ದೃಷ್ಟಿಕೋನದಲ್ಲಿ ಪ್ರಸ್ತುತಪಡಿಸುತ್ತಿರುವ ಅಣ್ಣಾ ವಾಲಿ ನಿರ್ದೇಶನ ಗುರುರಾಜ್ ಮಾರ್ಪಳ್ಳಿಯವರದು. ಸುಕುಮಾರ್ ಮೋಹನ್, ಸುಗಂಧಿ ಉಮೇಶ್ ಕಲ್ಮಾಡಿ, ಸುಧೀಂದ್ರ ಮೋಹನ್ ಮುಂತಾದವರ ನಟನೆಯ ಈ ನಾಟಕದ ಕನ್ನಡ ರಂಗ ಪ್ರಯೋಗ ಮುಂಬೈ ನಾಟಕ ಸ್ಪರ್ದೆಯಲ್ಲಿ 5 ವೈಯಕ್ತಿಕ ಪ್ರಶಸ್ತಿಯೊಂದಿಗೆ ನಾಟಕ ಪ್ರಶಸ್ತಿಯನ್ನೂ ಪಡೆದಿದೆ.

ಕನ್ನಡದ ಶ್ರೇಷ್ಠಕೃತಿಗಳಲ್ಲಿ ಒಂದಾದ ಜ್ಞಾನಪೀಠ ಪ್ರಶಸ್ತಿ ಪಡೆದ ಮೊತ್ತ ಮೊದಲ ಕವಿ ಕುವೆಂಪು ಅವರ ಶ್ರೀರಾಮಾಯಣದರ್ಶನಂ ಮತ್ತು ಯಕ್ಷಲೋಕದಲ್ಲಿ ಚಿರಪರಿಚಿತರಾಗಿದ್ದ ಪಾರ್ತಿಸುಬ್ಬ ಆಧಾರಿತ ಕೃತಿಯಾದ ಈ"ಅಣ್ಣಾವಾಲಿ'' ಕುಟುಂಬ ಕಲಹದಲ್ಲಿ ನಲುಗಿ ಅಸಾಹಯಕಳಾಗಿ ಕೇಳುವ ಹೆಣ್ಣೋರ್ವಳ ಉತ್ತರ ಸಿಗದ ಪ್ರಶ್ನೆಗಳು ಇಂದಿನ ಪುರುಷ ಪ್ರಧಾನ ಸಮಾಜಕ್ಕೂ ಕನ್ನಡಿ ಹಿಡಿಯುತ್ತದೆ. ನಾಟಕದ ಸಂಗೀತ ಅಳವಡಿಕೆಯು ಭಾವನಾತ್ಮಕವಾಗಿದ್ದು ಯಕ್ಷಬ್ಯಾಲೆಯ ನೆನಪನ್ನು ಮರುಕಳಿಸುವಂತದ್ದಾಗಿದೆ.

No comments:

Post a Comment