Tuesday 23 August 2011

"ಪಾಠನಾಟಕ" ತರಬೇತಿ ಶಿಬಿರ





  ಉಡುಪಿ; ಕರ್ನಾಟಕ ನಾಟಕ ಅಕಾಡೆಮಿ, ನಮತುಳುವೆರ್ ಕಲಾ ಸಂಘಟನೆ ಮುದ್ರಾಡಿ ಇದರ ಆಶ್ರಯದಲ್ಲಿ ಮುದ್ರಾಡಿಯ ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯ ಕನ್ನಡ ಸಂಘದ ವಿದ್ಯಾರ್ಥಿಗಳಿಗೆ "ಪಾಠನಾಟಕ" ತರಬೇತಿ ಶಿಬಿರವು ಮುದ್ರಾಡಿಯಲ್ಲಿ ನಡೆಯಿತು.
 ಮುದ್ರಾಡಿಯ ನಮತುಳುವೆರ್ ಕಲಾ ಸಂಘಟನೆ ಯ ನೇತೃತ್ವದಲ್ಲಿ ಈ ವಿದ್ಯಾರ್ಥಿಗಳು ಇದೇ ತಿಂಗಳ ಕೊನೇ ವಾರದಲ್ಲಿ ಉಡುಪಿ ಜಿಲ್ಲೆಯಾದ್ಯಂತ "ಶಾಲೆಯತ್ತ ರಂಗಭೂಮಿ-ಉಡುಪಿ ಜಿಲ್ಲಾ ಜಾಥಾ" ಹಮ್ಮಿಕೊಂಡಿದ್ದು ಜಿಲ್ಲೆಯ ಪ್ರೌಢಶಾಲೆಗಳಲ್ಲಿ ನಾಟಕ ಪ್ರದರ್ಶನವನ್ನು ನೀಡಲಿದೆ. ರಂಗಕರ್ಮಿ ಐಕೆ ಬೊಳುವಾರು ರವರು ರಂಗರೂಪಕ್ಕಿಳಿಸಿದ ಎಂಟರಿಂದ ಹತ್ತನೇ ತರಗತಿವರೆಗಿನ ಆಯ್ದ ಕನ್ನಡ ಪಾಠ ಹಾಗೂ ಪದ್ಯಗಳನ್ನು ರಂಗಕೃತಿಯಾಗಿಸಿಕೊಂಡು ಪುತ್ತೂರಿನ ರಂಗ ನಿರ್ದೇಶಕ ಮೌನೇಶ್ ವಿಶ್ವಕರ್ಮ ನಾಟಕವನ್ನು ಸಿದ್ದಪಡಿಸುತ್ತಿದ್ದಾರೆ. ಶಾಲಾ ಸಂಚಾಲಕ ದಿವಾಕರ ಎನ್.ಶೆಟ್ಟಿ, ತಾ.ಪಂ.ಅಧ್ಯಕ್ಷ ಮಂಜುನಾಥ ಪೂಜಾರಿ, ಸಾಹಿತಿ ಅಂಬಾತನಯ ಮುದ್ರಾಡಿ, ಗ್ರಾ.ಪಂ.ಅಧ್ಯಕ್ಷರಾದ ಸದಾಶಿವ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಬಾಯರಿ, ಶಿಕ್ಷಕ ಪಿ.ವಿ.ಆನಂದ್ ಸಾಲಿಗ್ರಾಮ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ, ನಾಟ್ಕ ಮುದ್ರಾಡಿ ಇದರ ಅಧ್ಯಕ್ಷರಾದ ಸುಕುಮಾರ್ ಮೋಹನ್, ಕಾರ್ಯದರ್ಶಿ ಸುಧೀಂದ್ರ ಮೋಹನ್, ಸುರೇಂದ್ರ ಮೋಹನ್, ನಿರ್ದೇಶಕ ಮೌನೇಶ್ ವಿಶ್ವಕರ್ಮ ಉಪಸ್ಥಿತರಿದ್ದರು.

No comments:

Post a Comment