Sunday 25 September 2011

ತುಳುವೆರ್ ಕಲಾ ಸಂಘಟನೆ (ರಿ) ಯ ೧೧ನೇ ವರ್ಷದ ನವರಂಗೋತ್ಸವ


ಮುದ್ರಾಡಿಯ ನಮ ತುಳುವೆರ್ ಕಲಾ ಸಂಘಟನೆ (ರಿ) ತನ್ನ ೨೬ನೇ ವರ್ಷದ ಸಂಭ್ರಮಾಚರಣೆಯಲ್ಲಿ ಖ್ಯಾತ ರಂಗಚಿಂತಕ ಲಿಂಗದೇವರು ಹಳೆಮನೆಯವರ ಸ್ಮರಣಾರ್ಥ ೧೧ನೇ ವರ್ಷದ ನವರಂಗೋತ್ಸವವನ್ನು ೨೦೧೧ರ ಸೆಪ್ಟೆಂಬರ್ ೨೮ರಿಂದ ಅಕ್ಟೋಬರ್ ೦೬ರವರೆಗೆ ಪ್ರತಿದಿನ ರಾತ್ರಿ ೭ ಘಂಟೆಗೆ ಬಿ. ವಿ. ಕಾರಂತ ಬಯಲು ರಂಗಸ್ಥಳದಲ್ಲಿ ನಡೆಸಲಿದೆ.
ಖ್ಯಾತ ಕಿರುತೆರೆ ಧಾರವಾಹಿಗಳ ನಿರ್ದೇಶಕರಾದ ಶ್ರೀ ವಿನು ಬಳಂಜರವರು ನವರಂಗೋತ್ಸವವನ್ನು ಉದ್ಘಾಟಿಸಲಿದ್ದಾರೆ, ಅಧ್ಯಕ್ಷತೆಯನ್ನು ಕಾರ್ಕಳ ಕ್ಷೇತ್ರದ ಶಾಸಕರಾದ ಶ್ರೀ ಗೋಪಾಲ ಭಂಡಾರಿಯವರು ವಹಿಸಲಿದ್ದಾರೆ, ಮುಖ್ಯ ಅಥಿತಿಯಾಗಿ ಬೆಂಗಳೂರಿನ, ಕರ್ನಾಟಕ ರಂಗಪರಿಷತ್ತಿನ ಅಧ್ಯಕ್ಷರಾದ ವಿಟ್ಠಲ ಕೊಪ್ಪದರವರು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದ ಅಧ್ಯಕ್ಷರಾಗಿ ಮಣಿಪಾಲದ ಡಾ|| ಹೆಚ್. ಶಾಂತಾರಾಮ್ ರವರು, ಮುಖ್ಯ ಅಥಿತಿಗಳಾಗಿ ದಿವಾಕರ್.ಎನ್. ಶೆಟ್ಟಿ, ಪ್ರಮೋದ್ ಮಧ್ವರಾಜ್ ಹಾಗು ಡಾ|| ರಾಜಾರಾಮ್ ರವರು ಭಾಗವಹಿಸಲಿದ್ದಾರೆ.

ರಾಜ್ಯದ ಹಲವೆಡೆಗಳಿಂದ ವಿವಿಧ ತಂಡಗಳು ನಿತ್ಯವೂ ತಮ್ಮ ನಾಟಕಗಳನ್ನು ಪ್ರದರ್ಶಿಸಲಿವೆ.

೨೮-೦೯-೨೦೧೧ ರಂದು ಬೆಂಗಳೂರಿನ ಸಂಸ(ರಿ) ತಂಡದವರಿಂದ ಸಿ. ಬಸವಲಿಂಗಯ್ಯ ನವರ ನಿರ್ದೇಶನದ "ಕಾತಾಚಿ ಕಥಾರಂಗ", ೨೯-೦೯-೨೦೧೧ ರಂದು ಧಾರವಾಡದ ರಂಗಪರಿಸರ(ರಿ) ತಂಡದವರಿಂದ ವಿಟ್ಠಲ ಕೊಪ್ಪದರವರ ನಿರ್ದೇಶನದ "ಖರೆ ಖರೆ ಸಂಗ್ಯಾ ಬಾಳ್ಯಾ", ೩೦-೦೯-೨೦೧೧ ರಂದು ಬೆಂಗಳೂರಿನ ವಿಜಯಭಾರತಿ ಕಲಾವೃಂದ(ರಿ)ತಂಡದವರಿಂದ ಸತೀಶ್ ಜೋಶಿ ನಿರ್ದೇಶನದ "ಸಮೀಕ್ಷಾ ಒಂದು ಹೆಣ್ಣು", ೦೧-೧೦-೨೦೧೧ ರಂದು ಬೆಂಗಳೂರಿನ ಪಂಚಮುಖಿ ನಟರ ಸಮೂಹ(ರಿ)ತಂಡದವರಿಂದ  ಮಧುಸೂಧನ್ ಕನೇಕಲ್ ನಿರ್ದೇಶನದ "ಕಾಯೋ - ಕಲ್ಪ", ೦೨-೧೦-೨೦೧೧ ರಂದು ಉಡುಪಿಯ ರಥಬೀದಿ ಗೆಳೆಯರು ಮಕ್ಕಳ ತಂಡದಿಂದ ಶ್ರೀಪಾದ ಭಟ್ ನಿರ್ದೇಶನದ "ಪುಷ್ಪರಾಣಿ", ೦೩-೧೦-೨೦೧೧ ರಂದು ಅನೇಕ(ರಿ) ತಂಡದವರಿಂದ ಸುರೇಶ್ ಆನಗಳ್ಳಿ ನಿರ್ದೇಶನದ "ಅಗ್ನಿಲೋಕ", ೦೪-೧೦-೨೦೧೧ ರಂದು ಕುಂದಾಪುರದ ರಂಗಾಧ್ಯಯನ ಕೇಂದ್ರ(ರಿ) ತಂಡದವರಿಂದ ಕಲ್ಲಪ್ಪ ಪೂಜಾರ ನಿರ್ದೇಶನದ "ಕಾಲಯಾತ್ರೆ", ೦೫-೧೦-೨೦೧೧ ರಂದು ನಾಟ್ಕ ಮುದ್ರಾಡಿ(ರಿ) ತಂಡದವರಿಂದ ಶ್ರೀಮತಿ ಸುಗಂಧಿ ಉಮೇಶ್ ಕಲ್ಮಾಡಿ ನಿರ್ದೇಶನದ "ಕೋರ್ಟ್ ಮಾರ್ಷಲ್" ಹಾಗು ಕೊನೆಯ ದಿನವಾದ ೦೬-೧೦-೨೦೧೧ ರಂದು ಅಜೆಕಾರಿನ ಶ್ರೀ ಮೂಕಾಂಬಿಕ ಯಕ್ಷಕಲಾ ಮಂಡಳಿ(ರಿ) ತಂಡದವರಿಂದ "ಶ್ರೀದೇವಿ ಮಹಾತ್ಮೆ" ಯಕ್ಷಗಾನ ಪ್ರದರ್ಶನ ನಡೆಯಲಿದೆ

No comments:

Post a Comment